ಆತ ಜಾಗೃತ ದೇವ. ಗ್ರಾಮದ ಆರಾಧ್ಯ ದೈವ ಆಂಜನೇಯ.ಆ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಸುತ್ತ ಭಂಡಾರ ಮಳೆ ಹನಿ ದೇಗುಲದ ಸುತ್ತ ಮುತ್ತ ಬಿದ್ದಿದ್ದು,ಗ್ರಾಮಸ್ಥರು ಅಚ್ಚರಿ ಪಡುವಂತೆ ಮಾಡಿದೆ.ಆ ಆಗ್ರದ ಆಂಜನೇಯಸ್ವಾಮಿ ಪವಾಡ ಎಂದು ಭಕ್ತರು ಅಂದುಕೊಂಡರೆ.ಇನ್ನು ಕೆಲವರು ಆಂಜನೇಯಸ್ವಾಮಿ ದರ್ಶನಕ್ಕೆ ಹರಿದು ಬರುತ್ತಿದ್ದಾರೆ.ಆಂಜನೇಯ ಸುತ್ತ ಭಂಡಾರ ಮಳೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ಒಂದೆಡೆ ದೇವಾಲಯದ ಸುತ್ತಮುತ್ತ ಮಳೆ ಸುರಿಯುತ್ತಿದ್ದ ವೇಳೆ ಬಿದ್ದ ಭಂಡಾರದ ಚಿಕ್ಕದಾದ ಹನಿ ಉಂಡೆಗಳು.ಇನ್ನೊಂದೆಡೆ ಬಿದ್ದ ಭಂಡಾರದ ಹನಿಗಳನ್ನ ಭಂಡಾರವೆಂದು ಹಣೆಗೆ ಹಚ್ಚಿಕೊಳ್ತಿರೋ ಹನುಮನ ಭಕ್ತು.ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಹೆಗ್ಗೂರು ಗ್ರಾಮದ ಆರಾಧ್ಯ ದೈವ ಆಂಜನೇಯಸ್ವಾಮಿ ದೇಗುಲದ ಸುತ್ತಮುತ್ತ. ಹೌದು ನಿನ್ನೆ ಸಂಜೆ ಸುರಿದ ಮಳೆ ವೇಳೆ ಆಂಜನೇಯಸ್ವಾಮಿ ದೇಗುಲದ ಸುತ್ತಮುತ್ತ ಭಂಡಾರದ ಮಳೆ ಹನಿಗಳು ಬಿದ್ದೆ,ಹಳದಿ ಬಣ್ಣನ ಹನಿ ಉಂಡೆಗಳನ್ನ ಆಂಜನೇಯ ಸ್ವಾಮಿ ಪ್ರಸಾದವೆಂದು ಹಣೆಗೆ ಹಚ್ಚಿಕೊಳ್ಳುವ ಮೂಲಕ ಭಕ್ತರು ಆಂಜನೇಯಸ್ವಾಮಿ ಪರುಕಳಿಗೆ ತಲೆಬಾಗಿದ್ದಾರೆ..
ಇನ್ನು ಹೆಗ್ಗೂರು ಆಂಜನೇಯ ದೇವಸ್ಥಾನದ ಸುತ್ತ ಭಂಡಾರ ಮಳೆ ಹನಿ ರೀತಿಯ ಹಳದಿ ಕಲೆಗಳು ಮೂಡಿದ್ದು,ವಿಷ್ಮಯ ನೋಡಲು ಜನಾ ದೇಗುಲದತ್ತ ದಾವಿಸುತ್ತಿದ್ದಾರೆ.ಬಂದವರೆಲ್ಲ
ಹಳದಿ ಕಲೆಗಳನ್ನು ತಿಕ್ಕಿ ಭಂಡಾರದ ಎಂದು ಹಣೆಗೆ ಲೇಪನ ಮಾಡಿಕೊಳ್ತಿದ್ದಾರೆ.
ಇದು ಆಂಜನೇಯಸ್ವಾಮಿ ಪವಾಡ, ಭಂಡಾರದ ಮಳೆ ಆಗಯ್ತು ಎಂದು ಭಕ್ತರ ಭಾವಿಸುತ್ತಿದ್ದಾರೆ.ಮಳೆ ಹನಿಯ ಹಳದಿ ಕಲೆಗಳ ಕಂಡು ಜನರಲ್ಲಿ ಅಚ್ಚರಿ ಮೂಡಿಸಿದೆ.ಈ ರೀತಿ ಮಳೆಯಾಗಿದ್ದು ಒಳ್ಳೆಯದಕ್ಕೋ ಕೆಟ್ಟದಕ್ಕೋ ಗೊತ್ತಿಲ್ಲ ಎಂದು ಗ್ರಾಮಸ್ಥರಲ್ಲಿ ಗೊಂದಲ ಮೂಡಿಸಿದೆ.ಹಿಂದೆ ಎಂದೂ ಈ ರೀತಿ ಆಗಿಲ್ಲ.ದೇವಸ್ಥಾನದ ಬಳಿಯಷ್ಟೆ ಹಳದಿ ಮಳೆ ಹನಿ ಸುರಿದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ ಅಂತಾರೆ ಗ್ರಾಮಸ್ಥರು….
ಒಟ್ಟಿನಲ್ಲಿ ಹೆಗ್ಗೂರು ಗ್ರಾಮದ ಆಂಜನೇಯಸ್ವಾಮಿ ದೇಗುಲದ ಸುತ್ತಮುತ್ತ ಮಾತ್ರ ಹಳದಿ ಬಣ್ಣದ ಮಳೆ ಹನಿ ನೆಲಕ್ಕೆ ಬಿದ್ದಿದ್ದು ಅಚ್ಚರಿ ಮೂಡಿಸಿದೆ.ಮಳೆ ಹನಿ ದೇಗುಲದ ಬಳಿ ಅಷ್ಟೆ ಬಣ್ಣ ಬದಲಾಯಿಸಿದ್ದು,ಗ್ರಾಮಕ್ಕೆ ಒಳಿತಿಗೂ ಕೆಡಕಿಗೂ ಗೊತ್ತಿಲ್ಲ ಎಂದು ಗ್ರಾಮಸ್ಥರ ಆಶ್ಚರ್ಯಕ್ಕೆ ಕಾರಣವಾಗಿದ್ದಂತೂ ಸುಳ್ಳಲ್ಲ..


Recent Comments