ಸರ್ಕಾರ ಬಡಜನರಿಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿ ಪಡಿತರ ಅಕ್ಕಿ ನೀಡುತ್ತೆ ಆದ್ರೆ ಇಂತಹ ಪಡಿತರ ಧಾನ್ಯವನ್ನ ಬಾಗಲಕೋಟೆ ಜಿಲ್ಲೆಯಲ್ಲಿ ಅಕ್ರಮವಾಗಿ ಪಕ್ಕದ ಮಹಾರಾಷ್ಟ್ರಕ್ಕೆ ಸಾಗಿಸುವ ಕಳ್ಳದಂಧೆ ನಿರಾತಂಕವಾಗಿದ್ದು, ಇದರಲ್ಲಿ ಶಾಮೀಲಾಗಿರೋ ದಂಧೆಕೋರರನ್ನ ಜಿಲ್ಲೆಯಿಂದಲೇ ಗಡಿಪಾರು ಮಾಡಿದ್ರೂ ಸಹ ಮತ್ತೇ ಅಕ್ರಮ ಅಕ್ಕಿ ಸಾಗಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, 6 ತಿಂಗಳಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಮೊತ್ತದ ಅಕ್ರಮ ಅಕ್ಕಿ ಸಾಗಾಟ ನಡೆದಿರೋದು ಬೆಳಕಿಗೆ ಬಂದಿದೆ. ಈ ಕುರಿತು ವರದಿ ಇಲ್ಲಿದೆ.

GFX…
ಬಾಗಲಕೋಟೆಯಲ್ಲಿ ನಿಲ್ಲದ ಅಕ್ರಮ ಪಡಿತರ ಅಕ್ಕಿ ಸಾಗಾಟ ದಂಧೆ….
6 ತಿಂಗಳಲ್ಲಿ 17 ಪ್ರಕರಣ, 50 ಲಕ್ಷ ರೂ. ಮೌಲ್ಯದ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಪತ್ತೆ.
ಬಾಗಲಕೋಟೆ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಾಟವಾಗುವ ಪಡಿತರ ಅಕ್ಕಿ..
ಗಡಿಪಾರಾಗಿದ್ದ ಕಳ್ಳನಿಂದಲೇ ಮತ್ತೆ ಶುರುವಾಯ್ತು ಅಕ್ರಮ ದಂಧೆ.
ಕಳೆದ ತಿಂಗಳು ಸೀಜ್ ಆಗಿದ್ದ ವಾಹನದಲ್ಲೇ ಮತ್ತೆ ಅಕ್ಕಿ ಸಾಗಾಟ.
ಲೋಡ್ ಗಟ್ಟಲೆ ಪಡಿತರ ಅಕ್ಕಿ ಸಂಗ್ರಹಿಸಿ ಚಿಕ್ಕೋಡಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಅಕ್ರಮ ಅಕ್ಕಿ ಸಾಗಾಟ.
ಕಾಟಾಚಾರಕ್ಕೆ ದಾಳಿ ಮಾಡ್ತಿದಾರಾ ಆಹಾರ ಇಲಾಖೆ ಅಧಿಕಾರಿಗಳು…?
ಜಿಲ್ಲೆಯ ರಬಕವಿ ನಗರದಲ್ಲಿ ಅಕ್ರಮವಾಗಿ ಮತ್ತೆ ಅನ್ನಭಾಗ್ಯ ಅಕ್ಕಿ ಸಂಗ್ರಹ.
ಗಡಿಪಾರಾಗಿದ್ದ ಆರೋಪಿ, ಅಕ್ಕಿ ರೂವಾರಿ ರಾಘವೇಂದ್ರ ತೇಲಿಯಿಂದ ಮತ್ತೆ ಅಕ್ಕಿ ದಂಧೆ ಶುರು.
ಜಿಲ್ಲಾಡಳಿತದ ಗಡಿಪಾರು ಆದೇಶ ಕೇವಲ ಕಾಟಾಚಾರಕ್ಕಾಯ್ತಾ…ದಂಧೆ ಬಿಡದ ಖದೀಮರು.
ರಬಕವಿಯಲ್ಲಿ 52 ಸಾವಿರೂ ರೂ ಮೌಲ್ಯದ 15 ಟನ್ ಅಕ್ಕಿ ವಶಕ್ಕೆ.
ರಿಜಿಸ್ಟ್ರೇಶನ್ ನಂಬರ್ ಇಲ್ಲದ ವಾಹನಗಳಲ್ಲಿ ಸಾಗಾಟ.
ಮಹಾಲಿಂಗಪುರ ಠಾಣೆ ಪೊಲೀಸರಿಂದ ವಶಕ್ಕೆ.
ಒಂದು ಲಾರಿ ಹಾಗೂ ಅಶೋಕ್ ಲೈಲೆಂಡ್ ಮಿನಿ ಟ್ರಕ್,
ಚಾಲಕ ಮಲ್ಲಪ್ಪ ಅಥಣಿ, ಗಡಿಪಾರಾಗಿದ್ದ ಅಕ್ಕಿ ರೂವಾರಿ ರಾಘವೇಂದ್ರ ತೇಲಿ ವಶಕ್ಕೆ.
ಎರಡು ವಾಹನಗಳಲ್ಲಿ ಸಾಗಾಟ.
ಚೀಲ ಬದಲಿಸಿ ಅಕ್ಕಿ ಸಾಗಾಟ..
ಮಹಾಲಿಂಗಪುರ ಮಾರ್ಗವಾಗಿ ಚಿಕ್ಕೋಡಿ ಕಡೆ ಹೊರಟಿದ್ದ ವಾಹನ.
ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ.
ಮಹಾಲಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.
ಹೀಗೆ ರಾತ್ರೋರಾತ್ರಿ ಅಕ್ರಮ ಅಕ್ಕಿ ಸಾಗಾಟ ಮಾಡ್ತಿರೋ ವಾಹನಗಳು, ವಾಹನಗಳ ತುಂಬ ಸರ್ಕಾರದ ಪಡಿತರ ಅಕ್ಕಿ ಮೂಟೆಗಳು, ಇವುಗಳ ಮಧ್ಯೆ ದಂಧೆಕೋರರ ವಿರುದ್ಧ ಗೂಂಡಾಕಾಯ್ದೆ ಜಾರಿಗೆ ಮುಂದಾದ ಪೋಲಿಸ ಇಲಾಖೆ, ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. ಹೌದು, ಸರ್ಕಾರ ಬಡವರಿಗಾಗಿ ನೀಡುವ ಅಕ್ರಮ ಪಡಿತರ ಅಕ್ಕಿ ಇದೀಗ ಬಾಗಲಕೋಟೆ ಜಿಲ್ಲೆಯಿಂದ ಸದ್ದಿಲ್ಲದೆ ಪಕ್ಕದ ಮಹಾರಾಷ್ಟ್ರಕ್ಕೆ ಸೇರುತ್ತಿದೆ.
ಜಿಲ್ಲೆಯಲ್ಲಿ ಆಹಾರ ಇಲಾಖೆ ದಾಳಿಗಳನ್ನ ನಡೆಸುತ್ತಾ ಬಂದಿದ್ದರೂ ಮತ್ತೆ ಮತ್ತೆ ಅಕ್ರಮ ಪಡಿತರ ಮಾರಾಟ ಪ್ರಕರಣಗಳು ಕಂಡು ಬಂದಿದ್ದು, ಪ್ರಸಕ್ತ ವರ್ಷ 6 ತಿಂಗಳಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುವ ಒಟ್ಟು 17 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಮೊತ್ತದ ಅಕ್ಕಿಯನ್ನ ವಶಕ್ಕೆ ಪಡೆಯಲಾಗಿದೆ. ಅಚ್ಚರಿ ಅಂದ್ರೆ ಕಳೆದ ತಿಂಗಳು ಅಕ್ರಮ ಅಕ್ಕಿ ಸಾಗಾಟ ಕೇಸ್ ನಲ್ಲಿದ್ದ ವಾಹನದಲ್ಲೇ ಈ ತಿಂಗಳೂ ಸಹ 15 ಟನ್ ಅಕ್ಕಿ ಸಾಗಾಟವಾಗ್ತಿರೋದು ಅಚ್ಚರಿ ಮೂಡಿಸಿದ್ದು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇನ್ನು ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ಸಾಗಾಟದ ಆರೋಪಿ ರಾಘವೇಂದ್ರ ತೇಲಿ ಎಂಬಾತನ ವಿರುದ್ಧ ಅಕ್ರಮ ಪಡಿತರ ಸಾಗಾಣಿಕೆ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿತ್ತು. ಇದು ನಿರಂತರ ಆಗಿದ್ದರಿಂದ ರಾಘವೇಂದ್ರ ವಿರುದ್ಧ 3 ತಿಂಗಳು ಗಡಿಪಾರು ಆದೇಶ ಸಹ ಮಾಡಲಾಗಿತ್ತು. ಆದ್ರೆ ಆತ ಮತ್ತೆ ಗಡಿಪಾರು ಅವಧಿ ಮುಗಿಸಿ ಬಂದು ಮತ್ತೇ ಅದೇ ದಂಧೆಗೆ ಇಳಿದಿದ್ದು, ಇದರಿಂದ ನಿರಾತಂಕವಾಗಿ ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ದಂಧೆ ನಡೆದಿದ್ದು, ಜಿಲ್ಲೆಯ ರಬಕವಿಯಲ್ಲಿ ಅಕ್ರಮ ಪಡಿತರ ಸಾಗಾಟ ಪ್ರಕರಣ ಕಂಡು ಬಂದಿದ್ದು, ಒಂದು ಲಾರಿ ಮತ್ತು ಮಿನಿ ಟ್ರಕ್ ನಲ್ಲಿ 52 ಸಾವಿರ ಮೌಲ್ಯದ 15 ಟನ್ ಅಕ್ಕಿ ವಶಕ್ಕೆ ಪಡೆಯಲಾಗಿದ್ದು, ಚಾಲಕ ಮಲ್ಲಪ್ಪ ಮತ್ತು ಆರೋಪಿ ರಾಘವೇಂದ್ರ ವಿರುದ್ಧ ಮಹಾಲಿಂಗಪೂರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಈ ಸಲ ಅಕ್ರಮ ಪಡಿತರ ಮಾರಾಟ ಮಾಡುವವರ ವಿರುದ್ಧ ಗೂಂಡಾಕಾಯ್ದೆ ಎಕ್ಟ್ ಜಾರಿ ಮಾಡಲಾಗುವುದೆಂದು ಬಾಗಲಕೋಟೆ ಎಸ್.ಪಿ.ಅಮರನಾಥ ರೆಡ್ಡಿ ಹೇಳಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಬಡಜನರಿಗೆ ಅಂತ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡುತ್ತಿದ್ದರೆ ಆದ್ರೆ ಇತ್ತ ಅಕ್ರಮ ಪಡಿತರ ಅಕ್ಕಿ ಸಾಗಾಟ ದಂಗೆಕೋರರು ಮಾತ್ರ ನಿರಾತಂಕವಾಗಿದ್ದು, ಇನ್ನಾದ್ರೂ ಇದಕ್ಕೆ ಬ್ರೇಕ್ ಬೀಳುತ್ತಾ ಅಂತ ಕಾಯ್ದು ನೋಡಬೇಕಿದೆ.


Recent Comments